ಬುಧವಾರ, ಜನವರಿ 28, 2009

ದುರ್ಗದ ಜನತೆಗೊಂದು ಕಹಿಸುದ್ದಿ


ದುರ್ಗದ ಜನರಲ್ಲಿ ಅತಿ ಉತ್ಸುಕತೆ, ಸಂಭ್ರಮದ ವಾತಾವರಣ ಮೂಡಿದ್ದು ನಿಜ. ಆದರೆ ಇವರಿಗೆ ಕಾದಿದೆ ಕಹಿಸುದ್ದಿ. ಅದೇನೆಂದರೆ ಭಾರತದ ಮಾಜಿ ರಾಷ್ಟ್ರಪತಿಯಾದ ಶ್ರೀ ವೆಂಕಟರಾಮನ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 7 ದಿನಗಳ ಶೋಕಾಚರಣೆ ಆಚರಿಸಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಪ್ರಯುಕ್ತ ಜಿಲ್ಲೆಯಲ್ಲಿ ಜನವರಿ 29 ರಿಂದ ಪ್ರಾರಂಭಗೊಳ್ಳಬೇಕಿದ್ದ ಅಮೃತ ಸಮ್ಮೇಳನವು ಫೆಬ್ರವರಿ 4, 5, 6 ಮತ್ತು 7ನೇ ತಾರೀಖಿಗೆ ಮುಂದೂಡಲಾಗಿರುತ್ತದೆ.


ರಾಜ್ಯದಲ್ಲಿ ಆಚರಿಸುತ್ತಿರುವ ಶೋಕಾಚರಣೆಯ ಹಿನ್ನೆಲೆಯಲ್ಲಿ ಸಮ್ಮೇಳನದಂತಹ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಿಲ್ಲ. ಆದ್ದರಿಂದ ಈಗಾಗಲೇ ನಿಗಧಿಪಡಿಸಿರುವ ಸಮ್ಮೇಳನದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲದೇ, ಬರುವ ಫೆಬ್ರವರಿ 4, 5, 6 ಮತ್ತು 7ರಂದು ಸಮ್ಮೇಳನವು ಅದ್ಧೂರಿಯಾಗಿ ನಡೆಯಲಿದೆ ಎಂದು ರಾಜ್ಯ ಕ.ಸಾ.ಪ. ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ್, ಸ್ವಾಗತ ಸಮಿತಿಯ ಮಹಾಪೋಷಕರಾಗಿರುವ ಶ್ರೀ ಶಿವಮೂರ್ತಿ ಶರಣರು, ಜಿಲ್ಲಾಧಿಕಾರಿಗಳಾದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಶ್ರೀ ಕೆ.ಎಂ.ವೀರೇಶ್ ರವರು ಮಂಗಳವಾರ ರಾತ್ರಿ ಕರೆದಿದ್ದ ತುರ್ತು ಸಭೆಯಲ್ಲಿ ವಿಷಯವನ್ನು ಚರ್ಚಿಸಲಾಯಿತು.


ದುರ್ಗದ ಜನತೆಗೆ ನಿಜಕ್ಕೂ ನಿರಾಶೆ. ಆದರೆ ಒಂದೆರಡು ದಿನಗಳ ನಂತರ ಬರುವ ಸಮ್ಮೇಳನದ ಸಂಭ್ರಮದ ನಿರಾಶೆಯ ಮೇಲೆ ತಣ್ಣೀರೆರಚಿದೆ. ತಡವಾದರೂ ಸೈ, ಅದೇ ಉತ್ಸಾಹ, ಸಂಭ್ರಮ, ಸಂತಸದಿಂದ ಅಮೃತ ಸಮ್ಮೇಳನದಲ್ಲಿ ಪಾಲ್ಗೊಳ್ಳೋಣ... ಜೈ ಕರ್ನಾಟಕ ಮಾತೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ