ಸೋಮವಾರ, ಡಿಸೆಂಬರ್ 29, 2008

ಯಾರನ್ನೂ ಮರೆಯಬೇಡಿ.....

ನೇಮಿಚಂದ್ರ

ಬಿ.ವಿ.ವೈಕುಂಠರಾಜು

ದತ್ತಾತ್ರೇಯ

ಯಾರನ್ನೂ ಮರೆಯಬೇಡಿ..

ಸಮ್ಮೇಳನದ ಸಿದ್ಧತೆ ಭರದಿಂದ ಸಾಗುತ್ತಿವೆ. ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ ಎಂಬ ಅಸಮಾಧಾನದಿಂದ ಕೆಲ ಮಿತ್ರರು ಪರ್ಯಾಯ ಸಮ್ಮೇಳನ ಮಾಡಲು ನಿರ್ಧರಿಸಿದ್ದಾರೆ. ನಾವೂ ಕೂಡ ಬರಗೂರು, ದೇವನೂರು ಅವರ ಹೆಸರನ್ನು ಪ್ರಸ್ತಾಪಿಸಿ ಇವರ ಆಯ್ಕೆಯಾಗಬೇಕೆಂಬ ಹಂಬಲ ವ್ಯಕ್ತಪಡಿಸಿದ್ದೆವು. ಇರಲಿ. ಪ್ರತಿಭಟನೆ ಇರಬೇಕು. ಅದನ್ನು ಜಿಲ್ಲೆಯ ಕೆಲ ಮಿತ್ರರು ದಾಖಲಿಸುತ್ತಿದ್ದಾರೆ.

ಈ ನಡುವೆ ಚಿತ್ರದುರ್ಗದ ಸಮ್ಮೇಳನದ ಸಮಿತಿಗಳು ಚುರುಕಾಗಿ ಕೆಲಸ ಮಾಡುತ್ತಿರುವ ಬಗ್ಗೆ ವರ್ತಮಾನವೂ ಬಂದಿದೆ. ಸಮ್ಮೇಳನದಲ್ಲಿ ಜಿಲ್ಲೆಯಲ್ಲಿರುವ, ಹಾಗೂ ಜಿಲ್ಲೆಯವರಾದ ಪ್ರತಿಭಾವಂತರನ್ನು, ಗಣ್ಯರನ್ನು ಸನ್ಮಾನಿಸಲು ಕೆಲವರನ್ನು ಆಯ್ಕೆ ಮಾಡಿರುವುದಾಗಿ ಕೇಳಿಬಂದಿದೆ.
ಪತ್ರಕರ್ತ ಬಿ.ವಿ.ವೈಕುಂಠರಾಜು, ಲೇಖಕಿ ಕೆ.ಆರ್.ಸಂಧ್ಯಾರೆಡ್ಡಿ, ನಾಟಕಕಾರ ಜಿ.ಜೆ.ಹರಿಜಿತ್, ಲೇಖಕಿ ನೇಮಿಚಂದ್ರ, ನಟ, ಲೇಖಕ ಎಚ್.ಜಿ.ಸೋಮಶೇಖರರಾವ್, ಇವರ ಸಹೋದರ ನಟ ದತ್ತಾತ್ರೇಯ, ಮಾವಿನಕೆರೆ ರಂಗನಾಥನ್ ಸೇರಿದಂತೆ ಅನೇಕರಿದ್ದಾರೆ.
ಇಲ್ಲಿ ಉಲ್ಲೇಖಿಸಿದ ಕೆಲ ಗಣ್ಯರ ಹೆಸರೇ ಇಲ್ಲವೆಂಬ ಸುದ್ದಿ ಕಿವಿಗೆ ಬಿದಿದ್ದೆ. ಹೇಗೋ ಮಾಡಿ ಮುಗಿಸುವ ತರಾತುರಿಯಲ್ಲಿ ಸಮ್ಮೇಳನದ ಸಮಿತಿ ಜಿಲ್ಲೆಯ ಕೆಲ ಹಿರಿಯ ಚೇತನಗಳನ್ನು ಮರೆತು ಅನರ್ಥ ಮಾಡದೇ ಹೋದರೆ ಸಾಕು!