ಗುರುವಾರ, ಜನವರಿ 22, 2009

ಸಾಹಿತ್ಯ ಸಮ್ಮೇಳನವ ಆಚರಿಸುವ ಬನ್ನಿ....

75ನೇ ಕನ್ನಡ ಸಾಹಿತ್ಯ ಸಮ್ಮೇಳನ,
ಅಂದು ನಮಲ್ಲಿರುವುದು ಸಂತಸದ ಚೇತನ.
ನಾವೆಲ್ಲಾ ಜೊತೆಗೂಡಿ ಹೋಗೋಣ,
ಸಂಭ್ರಮದ ಸವಿರುಚಿಯ ಸವಿಯೋಣ.


ಹಾಯ್ ಗೆಳೆಯರೇ....


2009ನೇ ಸಾಲು ಬಂದಿರುವುದು ಒಂದು ಸಂತೋಷದ ವಿಷಯ. ಏಕೆಂದರೆ ವರ್ಷದ ಆರಂಭದಲ್ಲಿಯೇ ದೇವರು ನಮಗೆ ಸಂತಸದ ಕ್ಷಣಗಳನ್ನು ಆಚರಿಸಲು ದಯಪಾಲಿಸಿರುವುದು ನಮ್ಮೆಲ್ಲರ ನಸೀಬು. ಸಾಹಿತ್ಯ ಎಂಬುದು ನಿನ್ನೆ ಇಂದಿನದಲ್ಲ. ಅದು ಗತಕಾಲದ ಗಣಿ. ಇಂತಹ ವೈಭವವನ್ನು ನಮ್ಮ 'ಚಿತ್ರದುರ್ಗ'ದಲ್ಲಿ ಅಗೆದು ಹೊರತೆಗೆದು ಇಡೀ ವಿಶ್ವಕ್ಕೇ ಇದರ ಶ್ರೇಷ್ಠತೆಯನ್ನು ಸಾರಲು ಹೊರಟಿರುವುದು ತುಂಬಾ ಗಮನಾರ್ಹ.

"ವರ್ಷದ ಸ್ಪರ್ಶದಿಂದ ಕಲ್ಲು ಹೊಳೆದಂತೆ, ಸಾಹಿತ್ಯಾಭಿಷೇಕದಿಂದ ಇಂದು ಚಿತ್ರದುರ್ಗ ಫಳಫಳನೇ ಥಳಿಸುತ್ತಿದೆ" ಅಬ್ಬಾ! ಕಲೆಯ ರುಚಿಯನ್ನು ಸವಿಯುವುದು ಎಷ್ಟೊಂದು ಜನ್ಮತಾಃ ಕೋಟಿ ಪುಣ್ಯ. ಕನ್ನಡ ನಾಡು, ನುಡಿ, ಸಂಸ್ಕೃತಿಯು ಇಂದು ಉತ್ತುಂಗ ಶಿಖರಕ್ಕೆ ಏರಿರುವುದು ಕನ್ನಡಮ್ಮನ ಕೃಪೆ. ಕಲೆ ಎಂಬುದು ಸುರಪಾನವಿದ್ದಂತೆ. ಕಲೆಯ ಸ್ವಾಧಿಷ್ಟ ರುಚಿ ಸವಿಯಲು ನಮ್ಮ ದುರ್ಗದ ಜನರ ಅದೃಷ್ಟ. ಇಂತಹ ನಾಡಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ. 'ಜಾತಕ ಪಕ್ಷಿ, ಮಳೆ ಬರುವುದನ್ನೇ ಕಾಯುತ್ತಾ, ಆಕಾಶವನ್ನೇ ನೋಡುವಂತೆ; ಸಾಹಿತ್ಯ ಸಮ್ಮೇಳನದ ಸಂಭ್ರಮದ ಆಚರಣೆಯನ್ನು ಸುಸೂತ್ರವಾಗಿ ನಡೆಸಲು ಹಾತೊರೆಯುತ್ತಿದ್ದೇವೆ.

ಅಂದಿನ ಈ ಹಬ್ಬ, ದುರ್ಗದ ಎಲ್ಲಾ ಮನೆಯಲ್ಲಿ ಕನ್ನಡ ದೀಪ ಹಚ್ಚಲಿ. ಆ ಬೆಳಕಿನಲಿ ದುರ್ಗದ ಕೀರ್ತಿ ಪ್ರಕಾಶಿಸಲಿ.

ಎಲ್ಲಿಂದಲಾದರೂ ಬಾ ಕನ್ನಡದ ಕಂದ,
ಮತ್ತೆಲ್ಲೂ ಸಿಗದೂ ಇಂಥಾ ಆನಂದ,
ನಮ್ಮೆಲ್ಲರ ಸಂತಸಕೆ, ಸಡಗರಕೆ ಪಾರವೇ ಇಲ್ಲ......!

- ಕೆ. ಮೆಹಬೂಬಿ, ಪಗಡಲಬಂಡೆ.
+91 99017 54041

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ