ಸೋಮವಾರ, ಜನವರಿ 5, 2009

ಇಲ್ಲಿ ಸಾಹಿತ್ಯಕ್ಕಂತೂ ಬರವಿಲ್ಲ...


ಚಿತ್ರದುರ್ಗ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಕೋಟೆ, ಕೊತ್ತಲ, ಬುರುಜು, ಬತೇರಿ, ಗವಿಗವ್ವರ....

ಹಾಗೆಂದು ಈ ನಾಡು ಬರೀ ಶೌರ್ಯಕ್ಕಲ್ಲ, ಪಾಂಡಿತ್ಯಕ್ಕೂ ಹೆಸರುವಾಸಿ. ಇಲ್ಲಿ ಸಾಕಷ್ಟೂ ಮಂದಿ ವಾಗ್ದೇವಿ ಸರಸ್ವತಿಯ ಸೇವಕರಿದ್ದಾರೆ. ಅಕ್ಷರಸೇವೆ ಮೂಲಕ ನಾಡಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅದಕ್ಕೆ ಚಿತ್ರದುರ್ಗ ಎಂದಾಕ್ಷಣ ಟಿ.ಎಸ್.ವೆಂಕಣ್ಣಯ್ಯ, ಬೆಳಗೆರೆ ಕುಟುಂಬದ ಚಂದ್ರಶೇಖರಶಾಸ್ತ್ರಿ, ಪಾರ್ವತಮ್ಮ, ಜಾನಕಮ್ಮ, ಕೃಷ್ಣಶಾಸ್ತ್ರಿ, ಹುಲ್ಲೂರು ಶ್ರೀನಿವಾಸ ಜೋಯಿಸರು, ತ.ಸು.ಶಾಮರಾಯರು, ತ.ರಾ.ಸುಬ್ಬಣ್ಣ, ಸಿದ್ದವ್ವನಹಳ್ಳಿ ಕೃಷ್ಣಶರ್ಮ, ಟಿ.ಆರ್.ರಾಧಾಕೃಷ್ಣ, ಪ್ರೋ. ಲಕ್ಷ್ಮಣ ತೆಲಗಾವಿ, ಪ್ರೋ. ಬಿ.ರಾಜಶೇಖರಪ್ಪ, ರಾಘವೇಂದ್ರ ಪಾಟೀಲರು, ಬಿ.ತಿಪ್ಪೇರುದ್ರಪ್ಪ, ಬಿ.ಎಲ್.ವೇಣು, ಚಂದ್ರಶೇಖರ ತಾಳ್ಯ, ಪ್ರಹ್ಲಾದ್ ಅಗಸನಕಟ್ಟೆ, ಲೋಕೇಶ್ ಅಗಸನಕಟ್ಟೆ, ಡಾ. ಮೀರಾಸಾಬಿಹಳ್ಳಿ ಶಿವಣ್ಣ, ನೇಮಿಚಂದ್ರ, ಬೇದ್ರೆ ಮಂಜುನಾಥ, ಡಾ. ಬಂಜಗೆರೆ ಜಯಪ್ರಕಾಶ್, ಹೀಗೆ ಹೆಸರುಗಳು ಓತಪ್ರೇತವಾಗಿ ನಾಲಿಗೆಯ ಮೇಲೆ ನಲಿದಾಡುತ್ತವೆ.

ಇದಿಷ್ಟೆ ಅಲ್ಲ, ಮಠಗಳ ತವರೂರು ಎಂದೆ ಕರೆಸಿಕೊಂಡಿರುವ ಈ ಐತಿಹಾಸಿಕ ನಗರಿಯಲ್ಲಿ ಸಾಹಿತ್ಯರಂಗಕ್ಕೆ ಮಠಾಧೀಶರು ನೀಡಿದ ಕೊಡುಗೆಯನ್ನು ಮರೆಯಲಾಗದು.

ಬೃಹನ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಶಿವಮೂರ್ತಿ ಮುರುಘಾ ಶರಣರು, ಸಿರಿಗೆರೆ ಶ್ರೀ ಶಿವಕುಮಾರ ಸ್ವಾಮೀಜಿ, ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಾಣೆಹಳ್ಳಿ ಪಂಡಿತಾರಾಧ್ಯರು ಈ ಸಾಲಿನಲ್ಲಿ ನಿಲ್ಲುತ್ತಾರೆ. ಸಾಣೆಹಳ್ಳಿ ನಾಟಕೋತ್ಸವವಂತೂ ಜಗತ್ಪ್ರಸಿದ್ದ..

ಹರ್ಷ ನ. ಪುರೋಹಿತ (ವಿ.ಕ., ಜನವರಿ 5, 2009)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ