ಶುಕ್ರವಾರ, ಜನವರಿ 16, 2009

ಸಡಗರದ ಅಮೃತ ಮಹೋತ್ಸವ...


ಚಿತ್ರದುರ್ಗದಲ್ಲಿ ನಡೆಯುತ್ತಿರುವ 75 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ದತೆ ತುಂಬಾ ಅದ್ಧೂರಿಯಾಗಿ ನಡೆಯುತ್ತಿದೆ. ಅಮೃತ ಸಮ್ಮೇಳನದ ಅಧ್ಯಕ್ಷರು ಹಾಗೂ ಕುಟುಂಬ ವರ್ಗದವರನ್ನು ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಿಂದ, ಗಾಂಧಿ ಸರ್ಕಲ್, ಬಿ.ಡಿ.ರೋಡ್ ಮಾರ್ಗವಾಗಿ ಒನಕೆ ಓಬವ್ವ ಸ್ಟೇಡಿಯಂವರೆಗೂ ರಥದ ಮೂಲಕ ಮಹಾವೇದಿಕೆಗೆ ಸ್ವಾಗತಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೆ.ಎಂ.ವೀರೇಶ್ ರವರು ತಿಳಿಸಿದ್ದಾರೆ.

ಚಿತ್ರದುರ್ಗದ ಅಮೃತ ಸಮ್ಮೇಳನದ ಮಹಾವೇದಿಕೆಯನ್ನು ಐತಿಹಾಸಿಕ ಚಿತ್ರದುರ್ಗವನ್ನು ವರ್ಣರಂಜಿತವಾಗಿ ಚಿತ್ರಿಸಲು, ಚಿತ್ರದುರ್ಗದ ಮಹತ್ವವನ್ನು ಸಾರಲು ಅದ್ಬುತವಾಗಿ ಸಿಂಗರಿಸಲಾಗುವುದು. ಅಲ್ಲದೇ ಮಹಾವೇದಿಕೆಯ ನಿರ್ಮಾಣಕ್ಕಾಗಿ ರೂ. 2.5 ಲಕ್ಷಗಳ ಅನುದಾನವನ್ನು ನಿಗಧಿಪಡಿಸಲಾಗಿದೆ. ವೇದಿಕೆಯಲ್ಲಿ ಸಿದ್ದಪಡಿಸಿದ ಆಸನಗಳ ಹಿಂಭಾಗದ ಪರದೆಯಲ್ಲಿ ಚಿತ್ರದುರ್ಗದ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಅಪ್ರತಿಮ ಕಲೆಯನ್ನು ಮೂಡಿಸುವ ಹೊಣೆಯನ್ನು ಶ್ರೀ ಕಣುಮೇಶ್, ಪ್ರಾಂಶುಪಾಲರು, ಎಸ್.ಜೆ.ಎಂ. ಕಲಾ ಶಾಲೆ, ಚಿತ್ರದುರ್ಗ ರವರು ಹೊತ್ತಿದ್ದಾರೆ. ಅವರ ಕೈಕುಂಚದಲ್ಲಿ ಮೂಡುತ್ತದೆ 'ಚಿತ್ರ'ದುರ್ಗ - 'ಚಿತ್ತಾರ'ದುರ್ಗ.

ನಾಲ್ಕು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ವಿವಿಧ ಗೋಷ್ಟಿಗಳಲ್ಲಿ ಭಾಗವಹಿಸುವ ಅತಿಥಿಗಳಿಗೆ, ವಿಷಯ ಮಂಡನೆ ಮಾಡುವ ಗಣ್ಯರಿಗೆ, ಸನ್ಮಾನಿತರಿಗೆ, ಹಾಗೂ ರಾಜ್ಯದ ಎಲ್ಲಾ ತಾಲ್ಲೂಕುಗಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳಿಗೆ ನೆನಪಿನ ಕಾಣಿಕೆ ನೀಡಲಾಗುವುದು ಸಂತಸದಿಂದ ವೀರೇಶ್ ರವರು ಉತ್ತರಿಸುತ್ತಾರೆ.

ನಿಜವಾಗಿಯೂ ಇದೇ ಅಲ್ಲವೇ ಚಿತ್ರದುರ್ಗದ ಅಮೃತ ಮಹೋತ್ಸವದ ಸಡಗರ.......

- ಆರ್.ರಾಘವೇಂದ್ರ, ಚಳ್ಳಕೆರೆ
+91 99168 22102

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ