ದುರ್ಗದ ಕಲ್ಲಲ್ಲಿ ಹೂವಾಗಿ ಅರಳುತ್ತಿರುವ ಕಲೆಗೆ ನೆಲೆಯಾಗಿರುವ 75ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೊದಲು ನಮ್ಮ ಹೃದಯಪೂರ್ವಕ ನಮನ. ಮಲೆನಾಡ ಮೈಸಿರಿಯು ಕಲೆಗೆ ತವರೂರು. ಇಂದು ಬೆಳ್ಳಿಬೆಟ್ಟದ ಆ ಕಲೆ ದುರ್ಗದ ನೆಲೆಯೂಗಿರುವುದು. ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ. ಬಂಡೆಯ ಜನರು ಎಷ್ಟು ಗಟ್ಟಿಯೋ, ಅಷ್ಟೇ ಜೇನ ಸವಿ. ಇಲ್ಲಿಯ ಜನರಿಗೆ ಕಲ್ಲು ಕಡೆದು ಗಂಧ ತೆಗೆಯುವ ಶಕ್ತಿ ಆ ದೇವಿ ಉಚ್ಚಂಗಮ್ಮ ಅನುಗ್ರಹಿಸಿರುವುದು. ನಮ್ಮ ಈ ಕೋಟಿ ಪುಣ್ಯ.
ಇಂತಹ ನಾಡಲ್ಲಿ ಕನ್ನಡದ ಕಂಪು ಪಸರಿಸಲು ಹೊರಟಿರುವ ಎಲ್ಲಾ ಕಲಾಸಕ್ತರಿಗೆ, ಸಾಹಿತ್ಯಾಸಕ್ತರಿಗೆ, ನನ್ನ ಅಭಿನಂದನೆಗಳು. ನಮ್ಮ ನಾಡಲ್ಲಿ ಸಾಹಿತ್ಯದ ಅಮೃತ ಮಹೋತ್ಸವದ ಹಬ್ಬ ನಡೆಯುತ್ತಿರುವುದು 'ಬಾಳೆ ಎಲೆಯಲ್ಲಿ! ಹೋಳಿಗೆ ಊಟ ಮಾಡಿದಷ್ಟೇ' ಸಂತಸ. ಗಟ್ಟಿಕಲ್ಲಿನ ಕೆತ್ತನೆ ಶಿಲ್ಪನೆ ಶಿಲ್ಪಿಗೆ ಮನೋಲ್ಲಾಸ. ದುರ್ಗದ ಕಲೆಯ ಸಾಹಿತ್ಯ ಸವಿಯಲು ಕಲಾಸಕ್ತರಿಗೆ ಅಮೃತ ಕುಡಿದಷ್ಟೇ ರಸಾನುಭವವಾಗಿ ಸದಾ ಕಲೆಯ ಸೊಗಡು ನಮ್ಮಲ್ಲಿ ರಾರಾಜಿಸುತ್ತಿರಲಿ.
ಕವನಗಳೆಂಬ ಬೀಜವನ್ನು ಬಿತ್ತಿ,
ನಗೆಹನಿಯೆಂಬ ಹೂ ಕಂಡು,
ಮೇಘರಾಜ ಕಿಲಕಿಲನೆ ನಗುತಾ
ಹರ್ಷದ ಕಲೆಯ ವರ್ಷವನ್ನು ಬೆಳ್ಳಿಬೆಟ್ಟದ
ಮೇಲೆ ಚೆಲ್ಲಿ, ತಂಪಿನ ಹರ್ಷೋದ್ಗಾರ
ಎಲ್ಲೆಡೆ ಮೊಳಗಲಿ, ಮೊಳಗಲಿ...
ಕಂಪು ಇಂಪು ಕಲೆಯಾಗಿದೆ
ಅಂತೂ ಇಂತೂ ನೆಲೆಯಾಗಿದೆ.
ಕಂಪಿನ ಸುವಾಸನೆ
ಮನದಲ್ಲಿರುವ ನಿಶಾನೆ
ಚಿತ್ತಾರದುರ್ಗದ ಬನದ
ಮಲ್ಲಿಗೆ ಹೂ ನೋಡೋಣ ಬನ್ನಿ...
- ಕೆ.ಮೆಹಬೂಬಿ, ಪಗಡಲಬಂಡೆ
99017 54041
re Anu nevu estu chennagi kavanaana baritira antha nangothirlilla kanri.... nag tumbane khushi aytu edanna odi... hige nevu kavanagalanna baritha eri aytha....
ಪ್ರತ್ಯುತ್ತರಅಳಿಸಿಅಕ್ಕ ನೀವು ತೂಬಾ ಚೆನ್ನಾಗಿ ಬರೆದಿದ್ದೀರ
ಪ್ರತ್ಯುತ್ತರಅಳಿಸಿಭಕ್ತ ಪ್ರಹ್ಲಾದ
ph:9740894485