ಬುಧವಾರ, ಫೆಬ್ರವರಿ 4, 2009

ಭವ್ಯ ಸಾಹಿತ್ಯ ಸಮ್ಮೇಳನಕ್ಕೆ ದಾಖಲೆ ದೇಣಿಗೆ ಸಂಗ್ರಹ

ಚಿತ್ರದುರ್ಗದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಜನತೆ ಅತಿ ಉತ್ಸಾಹದಿಂದ ಮುಂದಾಗಿದ್ದು, ಈವರೆಗೂ ದಾಖಲಾಗದ ದಾಖಲೆಯ ದೇಣಿಗೆಯನ್ನು ನೀಡುವುದರ ಮೂಲಕ ಅಕ್ಷರ ಜಾತ್ರೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೇ ಅಮೃತ ಸಾಹಿತ್ಯ ಸಮ್ಮೇಳನಕ್ಕೆ ನಾವೆಲ್ಲಾ ಕಂಕಣಬದ್ಧರಾಗಿ ಕಾರ್ಯೋನ್ಮುಖರಾಗುತ್ತೇವೆ ಎಂಬಂತೆ ದುರ್ಗದ ಜನತೆ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.


ನಿಜಕ್ಕೂ ದುರ್ಗದಲ್ಲಿ ಕಲ್ಲುಗಳಲ್ಲರಳಿದ ಸಾಹಿತ್ಯ ರಾಜ್ಯದ, ದೇಶದ, ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ಸಾಹಿತ್ಯಾಸಕ್ತರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆದಿದೆ. ದುರ್ಗದಲ್ಲಿ ಎಲ್ಲಿ ನೋಡಿದರೂ ಜನರಲ್ಲಿ ದಣಿಯದ ಉತ್ಸಾಹ, ಸಂಭ್ರಮ ಅಕ್ಷರಪ್ರಿಯರನ್ನು ಮೂಕವಿಸ್ಮಿತರನ್ನಾಗಿಸಿದೆ. ಇದು ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ದುರ್ಗದ ಜನರ ಒಲುಮೆಯನ್ನು ತೋರಿಸುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ