ಬುಧವಾರ, ಫೆಬ್ರವರಿ 4, 2009

ಎಸ್. ನಿಜಲಿಂಗಪ್ಪ ಮ್ಯೂಸಿಯಂ

ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿ ನಡೆಯುತ್ತಿರುವ 75ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ರವರ ನಿವಾಸ "ಶ್ವೇತಭವನ" ತಾತ್ಕಾಲಿಕವಾಗಿ ವಸ್ತುಸಂಗ್ರಹಾಲಯವಾಗಿ ರೂಪಾಂತರಗೊಳ್ಳಲಿದೆ.
ಸಮ್ಮೇಳನ ನಡೆಯುವ ನಾಲ್ಕು ದಿನ ಶ್ವೇತಭವನದಲ್ಲಿ ನಿಜಲಿಂಗಪ್ಪರವರ ಜೀವನ ಚರಿತ್ರೆ, ಪ್ರಮುಖ ಘಟನಾವಳಿಗಳ ಕುರಿತು ಸಚಿತ್ರ ವಸ್ತು ಪ್ರದರ್ಶನ ನಡೆಯಲಿದೆ. ಇದಕ್ಕೆ ಅವರ ಪುತ್ರ ಸಮ್ಮತಿ ಸೂಚಿಸಿದ್ದು, ಜಿಲ್ಲಾಧಿಕಾರಿಗಳಾದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್, ರವರು ಶ್ವೇತಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶ್ವೇತಭವನವನ್ನು ನಿಜಲಿಂಗಪ್ಪ ರವರ ಜೀವನ ಚರಿತ್ರೆ ಸಾರುವ ಮ್ಯೂಸಿಯಂ ಆಗಿ ಬಳಸಿಕೊಳ್ಳುವುದಾಗಿ ಜಿಲ್ಲಾಡಳಿತ ಮನವಿ ಮಾಡಿತು. ಹಾಗಾಗಿ ದುರ್ಗದಲ್ಲಿ ನಡೆಯುವ ಸಮ್ಮೇಳನದ ನಾಲ್ಕು ದಿನದ ಮಟ್ಟಿಗೆ ಅವಕಾಶ ನೀಡಲಾಗಿದೆ ಎಂದು ನಿಜಲಿಂಗಪ್ಪರವರ ಪುತ್ರ ಎಸ್.ಎನ್.ಕಿರಣ್ ಶಂಕರ್ ರವರು ಪತ್ರಿಕೆಗೆ ತಿಳಿಸಿದ್ದಾರೆ. ತಂದೆಯವರಿಗೆ ಸಂಬಂಧಿಸಿದಂತೆ ತಾಲ್ಲೂಕಿನ ಸೀಬಾರದ ಸಮೀಪವಿರುವ ಸ್ಮಾರಕ ಸ್ಥಳದಲ್ಲಿ ಶಾಶ್ವತ ವಸ್ತುಸಂಗ್ರಹಾಲಯ ಸ್ಥಾಪಿಸಲಾಗುವುದು. ಶ್ವೇತಭವನವನ್ನು ಇದೇ ನಿಟ್ಟಿನಲ್ಲಿ ಬಳಸಿಕೊಳ್ಳಲು ಸರಕಾರ ಮನವಿ ಮಾಡಿದರೆ ಷರತ್ತುಬದ್ಧರಾಗಿ ಒಪ್ಪಿಗೆ ನೀಡಲಾಗುವುದು ಎಂದು ಕಿರಣ್ ಶಂಕರ್ ಹೇಳುತ್ತಾರೆ.

ನಿಜಲಿಂಗಪ್ಪನವರ ಜೀವನವನ್ನು ನಮ್ಮ ಬಿಚ್ಚಿಡುವ ವಸ್ತು ಸಂಗ್ರಹಾಲಯವಾಗಿ ತೆರೆದುಕೊಳ್ಳಲಿದೆ.ಸುಮಾರು 2 ಲಕ್ಷ ವೆಚ್ಚದಲ್ಲಿ ಮನೆಯನ್ನು ಎಸ್ಸೆನ್ ಸ್ಮಾರಕ ವಸ್ತು ಸಂಗ್ರಾಹಲಯವನ್ನಾಗಿ ಮಾಡಲಾಗಿದ. ಎಸ್ಸೆನ್ ಸದಾ ಕೂರುತ್ತಿದ್ದ ಕುರ್ಚಿ, ವಾಕಿಂಗ್ ಸ್ಟಿಕ್, ಹಿರಿಯರೊಂದಿಗೆ ಬೆರೆತ ಕ್ಷಣಗಳನ್ನು ನಮ್ಮ ಮುಂದಿಡುವ ಭಾವಚಿತ್ರಗಳು. ನಿಜಲಿಂಗಪ್ಪ ಅವರಿಗೆ ಸಂದ ಪ್ರಶಸ್ತಿ, ಫಲಕಗಳು ಸೇರಿದಂತೆ ಇನ್ನೂ ಅನೇಕ ವಸ್ತುಗಳು ಇಲ್ಲಿ ನೋಡಲು ಸಿಗುತ್ತವೆ.ಸಮ್ಮೇಳನದ ಮೊದಲ ದಿನ ಈ ವಸ್ತು ಸಂಗ್ರಹಾಲಯ ಉದ್ಘಾಟನೆಯಾಗಲಿದೆ. ಜಿಲ್ಲೆಯ ಹಿರಿಯ ನಾಯಕರೊಬ್ಬರ ಬದುಕನ್ನು ಪರಿಚಯಿಸುವ ಈ ಸಂಗ್ರಹಾಲಯಕ್ಕೆ ತಪ್ಪದೇ ಭೇಟಿ ಕೊಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ