
ಚಿತ್ರದುರ್ಗದಲ್ಲಿ ಇಂದು ಬೆಳಿಗ್ಗೆ ಉಷೆ ಮೂಡಿದಾಗಿನಿಂದಲೂ ಹೊಸಕಳೆ, ಮೆರುಗು ಚಿತ್ರದುರ್ಗದ ಅಮೃತ ಸಮ್ಮೇಳನಕ್ಕೆ ಬಂದಿದೆ. ಇಂದು ಸಮ್ಮೇಳನಾಧ್ಯಕ್ಷರನ್ನು ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಒನಕೆ ಓಬವ್ವ ಕ್ರೀಡಾಂಗಣದವರೆಗೆ ಭವ್ಯ ಮೆರವಣಿಗೆಯೊಂದಿಗೆ ಸಮ್ಮೇಳನಾಧ್ಯಕ್ಷರಾದ ಶ್ರೀ ಡಾ. ಎಲ್.ಬಸವರಾಜು ರವರನ್ನು ಕರೆದೊಯ್ಯಲಾಯಿತು. ಸುಮಾರು 75 ಸಾಂಸ್ಕೃತಿಕ ಸಂಘಗಳಿಂದ ದಾರಿಯುದ್ದಕ್ಕೂ ನಾಡಿನ ಹಿರಿಮೆಯನ್ನು ಗರಿಗೆದರುತ್ತಾ ಸಮ್ಮೇಳನಾಧ್ಯಕ್ಷರನ್ನು ತ.ರಾ.ಸು. ವೇದಿಕೆಗೆ ಗೌರವಪೂರ್ವಕವಾಗಿ ಕರೆದೊಯ್ಯಲಾಯಿತು.

ಸಮ್ಮೇಳನದಲ್ಲಿ ಭಾಗವಹಿಸಿದ ಕಲಾವಿದರು

ಬಿಸಿಲಿನ ಜಳವಿದ್ದರೂ, ದುರ್ಗದಲ್ಲಿ ಉತ್ಸಾಹ ಕುಂದಲಿಲ್ಲ, ಯಾವುದೇ ಲೋಪದೋಷಗಳಿಗೆ ಜಗ್ಗಲಿಲ್ಲ. ಅಮೃತ ಸಮ್ಮೇಳನಕ್ಕೆ ಯಶಸ್ಸು ಈಗಾಗಲೇ ಕಂಡಿದೆ. ನಿರೀಕ್ಷೆಗಿಂತ ಹೆಚ್ಚು ಜನರು ಚಿತ್ರದುರ್ಗದಲ್ಲಿ ಸೇರಿದ್ದು, ಹಿಂದೆದಿಗಿಂತಲೂ ಉತ್ಕೃಷ್ಟ ಸಮ್ಮೇಳನವಾಗಲಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ