ಶನಿವಾರ, ಫೆಬ್ರವರಿ 7, 2009
ದಿನಾಂಕ: 06-02-2009ರ ಕಾರ್ಯಕ್ರಮಗಳು:
ದಿನಾಂಕ: 05-02-2009ರ ಕಾರ್ಯಕ್ರಮಗಳು
ಶುಕ್ರವಾರ, ಫೆಬ್ರವರಿ 6, 2009
ಗುರುವಾರ, ಫೆಬ್ರವರಿ 5, 2009
ಯಡಿಯೂರಪ್ಪರವರ 'ಕೋಟಿ' ಪುರಾಣ

ಚಿತ್ರದುರ್ಗದಲ್ಲಿ ನಿನ್ನೆ ನಡೆದ ಅಮೃತ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಜಿಲ್ಲೆಗಾಗಿ ಹಾಗೂ ಕನ್ನಡದ ಅಭಿವೃದ್ಧಿಗಾಗಿ ಈ ಕೆಳಕಂಡಂತೆ ಕೈಗೆತ್ತಿಕೊಳ್ಳಲಾಗುವ ಯೋಜನೆಗಳ ಕುರಿತು ವಿವರಣೆಯನ್ನು ನೀಡಿದರು
- ರಾಜ್ಯದ ಎಲ್ಲಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಂಶೋಧನೆ ಮತ್ತು ಅಭಿವೃದ್ದಿ - 2.00 ಕೋಟಿ.
- ರಾಜ್ಯದ ಮತ್ತು ಹೊರದೇಶದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಕೇಂದ್ರ ಸ್ಥಾಪನೆಗಾಗಿ - ತಲಾ 1.00 ಕೋಟಿಯಂತೆ ಒಟ್ಟು 5.00 ಕೋಟಿಗಳ ಅನುದಾನ
- ದುರ್ಗದಲ್ಲಿ ಒನಕೆ ಓಬವ್ವ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ
- ಕುವೆಂಪು ವಿಶ್ವವಿದ್ಯಾಲಯಕ್ಕೆ 100 ಎಕರೆ ಜಮೀನು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ 5.00 ಕೋಟಿಗಳ ಧನಸಹಾಯ.
- ವಾಲ್ಮೀಕಿ ಭವನ ನಿರ್ಮಾಣಕ್ಕೆ - 1.00 ಕೋಟಿ
- ಕನ್ನಡ ತಂತ್ರಾಂಶದ ಅಭಿವೃದ್ಧಿಗಾಗಿ - 2.00 ಕೋಟಿ
- ಕನ್ನಡದಲ್ಲಿ ವಿಕಿಪೀಡಿಯ ಮಾಹಿತಿಯ ವೆಬ್ ಸೈಟ್ ಗಾಗಿ - 1.00 ಕೋಟಿ
ಹೀಗೆ ಹತ್ತುಹಲವು ಕೋಟಿ ರೂಪಾಯಿಗಳ ಮಹತ್ತರ ಭರವಸೆಯನ್ನು ನಿನ್ನೆ ನಡೆದ ಅಮೃತ ಸಮ್ಮೇಳನದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಘಂಟಾಘೋಷವಾಗಿ ನೀಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಕರ್ನಾಟಕ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ್ ರವರು ಮಾತನಾಡುತ್ತಾ, ಯಡಿಯೂರಪ್ಪನವರನ್ನು "ಕನ್ನಡದ ಮುಖ್ಯಮಂತ್ರಿ" ಎಂದೂ, ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಪಶ್ಚಿಮಬಂಗಾಲ ಮೂಲದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್, ರವರ ಕರ್ತವ್ಯ ನಿಷ್ಟೆ, ಕನ್ನಡದ ಪ್ರೀತಿಯನ್ನು ಮೆಚ್ಚಿ, "ಕನ್ನಡದ ಕಟ್ಟಾಳು" ಬಿರುದು ನೀಡಿದರು.
ಮೊದಲೇ ನಿರೀಕ್ಷಿಸಿದಂತೆ ಕಡಿಮೆ ಜನ ಬರುವ ನಿಟ್ಟಿನಲ್ಲಿ ಸಮ್ಮೇಳನದ ಊಟದ ವ್ಯವಸ್ಥೆಯಲ್ಲಿ ಸ್ವಲ್ಪ ಏರುಪೇರು ಕಂಡಿತು. 90 ಊಟದ ಕೌಂಟರ್ ಗಳನ್ನು ತೆರೆದಿದ್ದರೂ, ಬಫೆ ಸಿಸ್ಟಂ ಮಾಡಿದ್ದರೂ, ಕೂಪನ್ ಇರುವವರಿಗೆ ಮಾತ್ರ ಊಟದ ವ್ಯವಸ್ಥೆ ಮಾಡದೇ, ಎಲ್ಲರಿಗೂ ನೀಡುವಲ್ಲಿ ಹೋಗಿ, ಊಟದ ವ್ಯವಸ್ಥೆಯಲ್ಲಿ ಸಾಹಿತ್ಯಾಸಕ್ತರಿಗೆ ಸ್ವಲ್ಪ ಅಸಮಾಧಾನವಾಯಿತು. ಜಿಲ್ಲೆಯಲ್ಲಿ ಈಗಾಗಲೇ ಶಾಲಾ ಕಾಲೇಜುಗಳಿಗೆ ರಜಾ ಘೋಷಣೆಯಾಗಿದ್ದರಿಂದ ಶಾಲಾ ಮಕ್ಕಳು, ಶಿಕ್ಷಕರು ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರಿಂದ ಸುಮಾರು 60000ಕ್ಕೂ ಹೆಚ್ಚು ಮಂದಿ ಊಟಕ್ಕೆ ಪರದಾಡುವಂತಾಯಿತು.
ಭವ್ಯ ಮೆರವಣಿಗೆ:
ಮದಕರಿನಾಯಕ ಮತ್ತು ಮುರುಘಶ್ರೀಗಳ ಪ್ರತಿಕೃತಿ, ಭೂಗೋಲದ ಸ್ಥಬ್ದ ಚಿತ್ರ, ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳ ಕನ್ನಡ ಸಂಘಗಳು, ಹಲಗೆ ಕುಣಿತ, ಜಿಲ್ಲೆಯ ತಾಲ್ಲೂಕುಗಳ ಕಲಾತಂಡಗಳು, ಬೇಡರ ಪಡೆ, ನಂದಿಧ್ವಜ ಕುಣಿತ, ಕೋಲಾಟ, ವೀರಗಾಸೆ, ಸೋಮನ ಕುಣಿತ, ಮಹಿಳೆಯರ ಡೊಳ್ಳುಕುಣಿತ, ಹೀಗೆ ಹತ್ತು ಹಲವು ವಿಶಿಷ್ಟತೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕಂಡುಬಂದಿತು. ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಬಿ.ಡಿ. ರಸ್ತೆ ಮಾರ್ಗವಾಗಿ ಮಧ್ಯಾಹ್ನ 2-20ರ ವೇಳೆಗೆ ಒನಕೆ ಓಬವ್ವ ಕ್ರೀಡಾಂಗಣಕ್ಕೆ ಮೆರವಣಿಗೆ ಸೇರಿತು.
ಬುಧವಾರ, ಫೆಬ್ರವರಿ 4, 2009
ಸಮ್ಮೇಳನದ ಮೊದಲನೇ ದಿನ: ಭವ್ಯ ಮೆರವಣಿಗೆ



ಭವ್ಯ ಸಾಹಿತ್ಯ ಸಮ್ಮೇಳನಕ್ಕೆ ದಾಖಲೆ ದೇಣಿಗೆ ಸಂಗ್ರಹ
ಎಸ್. ನಿಜಲಿಂಗಪ್ಪ ಮ್ಯೂಸಿಯಂ

ಸಮ್ಮೇಳನ ನಡೆಯುವ ನಾಲ್ಕು ದಿನ ಶ್ವೇತಭವನದಲ್ಲಿ ನಿಜಲಿಂಗಪ್ಪರವರ ಜೀವನ ಚರಿತ್ರೆ, ಪ್ರಮುಖ ಘಟನಾವಳಿಗಳ ಕುರಿತು ಸಚಿತ್ರ ವಸ್ತು ಪ್ರದರ್ಶನ ನಡೆಯಲಿದೆ. ಇದಕ್ಕೆ ಅವರ ಪುತ್ರ ಸಮ್ಮತಿ ಸೂಚಿಸಿದ್ದು, ಜಿಲ್ಲಾಧಿಕಾರಿಗಳಾದ ಶ್ರೀ ಅಮ್ಲಾನ್ ಆದಿತ್ಯ ಬಿಸ್ವಾಸ್, ರವರು ಶ್ವೇತಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶ್ವೇತಭವನವನ್ನು ನಿಜಲಿಂಗಪ್ಪ ರವರ ಜೀವನ ಚರಿತ್ರೆ ಸಾರುವ ಮ್ಯೂಸಿಯಂ ಆಗಿ ಬಳಸಿಕೊಳ್ಳುವುದಾಗಿ ಜಿಲ್ಲಾಡಳಿತ ಮನವಿ ಮಾಡಿತು. ಹಾಗಾಗಿ ದುರ್ಗದಲ್ಲಿ ನಡೆಯುವ ಸಮ್ಮೇಳನದ ನಾಲ್ಕು ದಿನದ ಮಟ್ಟಿಗೆ ಅವಕಾಶ ನೀಡಲಾಗಿದೆ ಎಂದು ನಿಜಲಿಂಗಪ್ಪರವರ ಪುತ್ರ ಎಸ್.ಎನ್.ಕಿರಣ್ ಶಂಕರ್ ರವರು ಪತ್ರಿಕೆಗೆ ತಿಳಿಸಿದ್ದಾರೆ. ತಂದೆಯವರಿಗೆ ಸಂಬಂಧಿಸಿದಂತೆ ತಾಲ್ಲೂಕಿನ ಸೀಬಾರದ ಸಮೀಪವಿರುವ ಸ್ಮಾರಕ ಸ್ಥಳದಲ್ಲಿ ಶಾಶ್ವತ ವಸ್ತುಸಂಗ್ರಹಾಲಯ ಸ್ಥಾಪಿಸಲಾಗುವುದು. ಶ್ವೇತಭವನವನ್ನು ಇದೇ ನಿಟ್ಟಿನಲ್ಲಿ ಬಳಸಿಕೊಳ್ಳಲು ಸರಕಾರ ಮನವಿ ಮಾಡಿದರೆ ಷರತ್ತುಬದ್ಧರಾಗಿ ಒಪ್ಪಿಗೆ ನೀಡಲಾಗುವುದು ಎಂದು ಕಿರಣ್ ಶಂಕರ್ ಹೇಳುತ್ತಾರೆ.
ನಿಜಲಿಂಗಪ್ಪನವರ ಜೀವನವನ್ನು ನಮ್ಮ ಬಿಚ್ಚಿಡುವ ವಸ್ತು ಸಂಗ್ರಹಾಲಯವಾಗಿ ತೆರೆದುಕೊಳ್ಳಲಿದೆ.ಸುಮಾರು 2 ಲಕ್ಷ ವೆಚ್ಚದಲ್ಲಿ ಮನೆಯನ್ನು ಎಸ್ಸೆನ್ ಸ್ಮಾರಕ ವಸ್ತು ಸಂಗ್ರಾಹಲಯವನ್ನಾಗಿ ಮಾಡಲಾಗಿದ. ಎಸ್ಸೆನ್ ಸದಾ ಕೂರುತ್ತಿದ್ದ ಕುರ್ಚಿ, ವಾಕಿಂಗ್ ಸ್ಟಿಕ್, ಹಿರಿಯರೊಂದಿಗೆ ಬೆರೆತ ಕ್ಷಣಗಳನ್ನು ನಮ್ಮ ಮುಂದಿಡುವ ಭಾವಚಿತ್ರಗಳು. ನಿಜಲಿಂಗಪ್ಪ ಅವರಿಗೆ ಸಂದ ಪ್ರಶಸ್ತಿ, ಫಲಕಗಳು ಸೇರಿದಂತೆ ಇನ್ನೂ ಅನೇಕ ವಸ್ತುಗಳು ಇಲ್ಲಿ ನೋಡಲು ಸಿಗುತ್ತವೆ.ಸಮ್ಮೇಳನದ ಮೊದಲ ದಿನ ಈ ವಸ್ತು ಸಂಗ್ರಹಾಲಯ ಉದ್ಘಾಟನೆಯಾಗಲಿದೆ. ಜಿಲ್ಲೆಯ ಹಿರಿಯ ನಾಯಕರೊಬ್ಬರ ಬದುಕನ್ನು ಪರಿಚಯಿಸುವ ಈ ಸಂಗ್ರಹಾಲಯಕ್ಕೆ ತಪ್ಪದೇ ಭೇಟಿ ಕೊಡಿ.
ಮಂಗಳವಾರ, ಫೆಬ್ರವರಿ 3, 2009
ಸೋಮವಾರ, ಫೆಬ್ರವರಿ 2, 2009
ಪೈಲ್ವಾನ್ ನಂಜಪ್ಪ

“ಗಂಡು ಮೆಟ್ಟಿನ ನಾಡು” ಎಂದೇ ಹೆಸರಾದ ಚಿತ್ರದುರ್ಗದ ಕುಸ್ತಿಕಲೆಯೂ ಸಾಹಸಮಯ ಕ್ರೀಡೆಯಾಗಿ ಇತಿಹಾಸ ಪುಟಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಹಿಂದೆ ವಿಜಯನಗರದ ಅರಸರು ಈ ಪ್ರಾಂತ್ಯವನ್ನು ಆಳುತ್ತಿದ್ದಾಗ ಹೆಬ್ಬಂಡೆಗಳ ನಡುವಿನ ಗುಹೆಯೊಂದು ‘ಗೋಪೆನಾಯಕಯ್ಯ’ ಎಂಬುವವನ ಗರಡಿಯಾಗಿತ್ತು. ಮುಂದೆ ಅದೇ ಗರಡಿಯೂ ಪಾಳೆಯಗಾರರ ಕಾಲದಲ್ಲಿಯೂ ಮುಂದುವರೆಯಿತು. ಹಾಗೆಯೇ ಇದರೊಂದಿಗೆ ಕೆಲವು ಹೊಸ ಗರಿಗಳು ಅಸ್ತಿತ್ವಕ್ಕೆ ಬಂದವು. ಮಲ್ಲ (ಕುಸ್ತಿ) ಕಲೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡು ಬಂದಿದ್ದ “ಜಟ್ಟಿ” ಎಂಬ ಜನಾಂಗವು ಇಲ್ಲಿಯ ಪಾಳೆಯಗಾರರಿಗೆ ತಮ್ಮ ಕಲೆಯನ್ನು ಕಲಿಸುತ್ತಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಈ ಮಲ್ಲ ಕಲೆ ಪರಂಪರೆಯ ಚಿತ್ರದುರ್ಗ ಈಗಿನ ಕೆಲವು ಗರಡಿಮನೆಗಳಲ್ಲಿ ಮುಂದುವರೆದಿರುತ್ತದೆ.
ಇಲ್ಲಿಯ ಪ್ರಸಿದ್ಧ ಗರಡಿಗಳೆಂದರೆ ದೊಡ್ಡಗರಡಿ, ಸಣ್ಣಗರಡಿ, ಬುರುಜನಹಟ್ಟಿಯ ಗರಡಿ ಮತ್ತು ಹಗಲು ನೀವಟಿಗೆ ಗರಡಿ, ಚಿತ್ರದುರ್ಗದ ಬೃಹನ್ಮಠವೂ ಸಹ ಕುಸ್ತಿಕಲೆಗೆ ವಿಶೇಷ ಪ್ರೋತ್ಸಾಹ ನೀಡಿದ್ದುಂಟು. ಈಗ್ಗೆ ಕೆಲವು ದಶಕಗಳ ಹಿಂದೆ ಬೃಹನ್ಮಠ ನಡೆಸುತ್ತಿದ್ದ “ಜಯದೇವ ಜಂಗೀ ಕುಸ್ತಿ”ಗಳೇ ಸಾಕ್ಷಿ.
ಕುಸ್ತಿ ಎಂದೊಡನೇ ಚಿತ್ರದುರ್ಗದ ಜನಮನಗಳಲ್ಲಿ ಥಟ್ಟನೇ ಮೂಡುವ ಚಿತ್ರ “ಪೈಲ್ವಾನ್ ನಂಜಪ್ಪ”ನವರದು. ಇವರು ಇಹಲೋಕವನ್ನು ತ್ಯಜಿಸಿ ಸುಮಾರು ನಾಲ್ಕು ದಶಕಗಳೇ ಕಳೆದರೂ, ಈಗಲೂ ಸಹ ಜನರು ಹಾಗೂ ಅವರ ಸಮಕಾಲೀನರು ಅವರ ಸಾಹಸಮಯ ಕ್ರೀಡಾ ಪ್ರತಿಭೆಯನ್ನು ಕೊಂಡಾಡತ್ತಾರೆ. ಈ ಶತಮಾನದಲ್ಲಿ ಚಿತ್ರದುರ್ಗವು ಕುಸ್ತಿಕ್ಷೇತ್ರಕ್ಕೆ ನೀಡಿದ ದೊಡ್ಡ ಕೊಡುಗೆ “ಪೈಲ್ವಾನ್ ನಂಜಪ್ಪ” ಎಂದರೇ ಅತಿಶಯವಿಲ್ಲ. ನಂಜಪ್ಪನವರು ಮೂಲತಃ ಉತ್ತರದಿಂದ ಬಂದ ‘ಲಾಡರು’ ಎಂಬ ಜನಾಂಗದವರಾಗಿದ್ದರು. ವಿದ್ಯಾಭ್ಯಾಸದ ಕಡೆ ಅಂಥ ಒಲವಿಲ್ಲದ ನಂಜಪ್ಪನವರು ಕುಸ್ತಿ ಕಲೆಯೆಡೆಗೆ ಆಕರ್ಷಿತರಾದರು. ನಂಜಪ್ಪನವರು ನಗರದ ದೊಡ್ಡಗರಡಿಯ ಉಸ್ತಾದರಾಗಿದ್ದು, ಬುಡ್ಡಣ್ಣನವರ ಬಳಿ ಕುಸ್ತಿ ಕಲೆಯ ಸೂಕ್ಷ್ಮ ಪಟ್ಟುಗಳನ್ನು ಕಲಿತುಕೊಂಡರು. ತದನಂತರ ಮೂಲತಃ ಲಾಹೋರ್ ನಿಂದ ಬಂದ ಉಸ್ತಾದ್ ಪರಿಪೈಗರ್ ನಂಜಪ್ಪನವರನ್ನು ಅಪರೂಪದ ಕುಸ್ತಿಪಟುವಾಗಿ ತಿದ್ದಿತೀಡಿದರು. ಈ ಗುರುಶಿಷ್ಯರ ಸಂಭಂಧದ ಅನ್ಯೋನ್ಯತೆಯು ಹಿಂದೂ-ಮುಸ್ಲಿಂ ಭಾವೈಕ್ಯದ ಒಂದು ಶ್ರೇಷ್ಠ ಉದಾಹರಣೆಯಾಗಿದೆ.
ಪೈಲ್ವಾನ್ ನಂಜಪ್ಪ ಕುಸ್ತಿಪಟು ಅಷ್ಟೇ ಆಗಿರದೇ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು. 1947ರಲ್ಲಿ ನಡೆದ “ಮೈಸೂರು ಚಲೋ” ಚಳುವಳಿಯಲ್ಲಿ ತಾಲ್ಲೂಕು ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದ ವೀರ ನಂಜಪ್ಪ ಅಂದು ಪೋಲಿಸರ ಗುಂಡೇಟಿನಿಂದ ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡಿದ್ದರು. ಈ ಒಂದು ನಂಜಪ್ಪನವರ ದೇಶಭಕ್ತಿಗೆ ಒಂದು ನಿದರ್ಶನವಾಗಿದೆ. ಅಷ್ಟೇ ಅಲ್ಲದೇ ಆಗಿನ ಹಲವಾರು ನಾಟಕ ಕಂಪನಿಗಳಲ್ಲಿ ಹವ್ಯಾಸಿ ತಬಲವಾದಕರಾಗಿ ಹಿರಣಯ್ಯರವರಂತಹ ದಿಗ್ಗಜರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಲವಾರು ನಾಟಕ ಕಂಪನಿಗಳ ಸಂಪರ್ಕವಿದ್ದ ನಂಜಪ್ಪನವರಿಗೆ ಸಹಜವಾಗಿ ಕನ್ನಡದ ವರನಟ ‘ಡಾರಾಜ್’ ರವರ ಸ್ನೇಹವುಂಟಾಗಿ, ರಾಜ್ ರವರ “ರಣಧೀರ ಕಂಠೀರವ” ಚಿತ್ರದಲ್ಲಿ ಅತಿಥಿ ನಟನಾಗಿ, ಪೈಲ್ವಾನ್ ಪಾತ್ರವನ್ನೇ ಅಭಿನಯಿಸಿದ್ದರು. ಇವರ ಪೈಲ್ವಾನ್ ಶಿಷ್ಯರಲ್ಲಿ ಹೆಚ್ಚು ಪ್ರಸಿದ್ದರಾದವರು ಗೌಳಿಗರ ಲಿಂಗಣ್ಣ(ಮೂಗ).
ಬಹುಮುಖ ಪ್ರತಿಭಾವಂತರು, ಕುಸ್ತಿಪಟು, ರಾಷ್ಟ್ರಪ್ರೇಮಿಯೂ ಆಗಿದ್ದ ಪೈಲ್ವಾನ್ ನಂಜಪ್ಪನವರು 1965ರಲ್ಲಿ ವಿಧಿವಶರಾದರು. ಕುಸ್ತಿಕಲೆಗೆ ಇವರು ಮಾಡಿದ ಸಾಧನೆಯ ಸ್ಮರಣಾರ್ಥವಾಗಿ ಕಾಮನ ಬಾಗಿಲು ಎದುರಿಗೆ ಮಹಾರಾಣಿ ಕಾಲೇಜಿನ ಬದಿಯಲ್ಲಿ ಅವರ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ. ದೊಡ್ಡಗರಡಿಯವರು ನೂಲಹುಣ್ಣಿಮೆಯನ್ನು ಆಚರಿಸುವಾಗ ಇವರ ದೊಡ್ಡ ಭಾವಚಿತ್ರವು ಮೆರವಣಿಗೆಯಲ್ಲಿ ಸಾಗುತ್ತದೆ.
ಚಿತ್ರದುರ್ಗದ "ಚಿತ್ತಾರದುರ್ಗ" ವೆಬ್ ತಾಣ
ಚಿತ್ರದುರ್ಗ ಜಿಲ್ಲಾ ದರ್ಶನ; ಡಿ.ವಿ.ಡಿ.ಯಲ್ಲಿ...

ಪರಿಚಯಿಸಿದವರು: ಬೇದ್ರೆ ಮಂಜುನಾಥ ವಿಳಾಸ: ಪ್ರಸಾರ ನಿವರ್ಾಹಕರು, ಆಕಾಶವಾಣಿ, ಚಿತ್ರದುರ್ಗ
ಸಮ್ಮೇಳನಾಧ್ಯಕ್ಷರ ಸಂದರ್ಶನ...

(ಕೃಪೆ: ಸಂಡೇ ಇಂಡಿಯನ್)
ಭಾನುವಾರ, ಫೆಬ್ರವರಿ 1, 2009
ದುರ್ಗದ ಚಲನಚಿತ್ರಗಳು

ಚಿತ್ರದುರ್ಗ ಇತಿಹಾಸವನ್ನು ನೆನಪಿಸುವ ಹಾಗೂ ಸಾಮಾಜಿಕವಾಗಿದ್ದರೂ ದುರ್ಗದ ಸ್ಮಾರಕಗಳ ಮಧ್ಯೆ ಚಿತ್ರಿತವಾದ ಚಲನಚಿತ್ರಗಳು ಜನರ ಮೇಲೆ ಬೀರಿದ ಪ್ರಭಾವ ಅಪಾರ. ತ.ರಾ.ಸು. ಸೃಷ್ಟಿಸಿದ 'ಹಂಸಗೀತೆ' ಕನ್ನಡದಲ್ಲಿ ಚಿತ್ರವಾಗುವ ಮೊದಲೇ ಹಿಂದಿಯಲ್ಲಿ 'ಬಸಂತ್ ಬಹಾರ್' ಆಗಿ ದೇಶದಲ್ಲೆಲ್ಲಾ ಮನೆಮಾತಾಗಿದ್ದು, ಈಗ ಇತಿಹಾಸ. ದುರ್ಗಾಧಾರಿತ ಕನ್ನಡ ಕಾದಂಬರಿಯೊಂದು ಮೊದಲ ಬಾರಿಗೆ ಹಿಂದಿನ ಚಲನಚಿತ್ರವಾದುದು ದುರ್ಗದವರ ಮಟ್ಟಿಗೆ ಹೆಮ್ಮೆಯ ಸಂಗತಿ. ಈ ಚಿತ್ರ ಅಮೇರಿಕಾದ ಟಿ.ವಿ. ವಾಹಿನಿ (ಚಾನೆಲ್)ಯಲ್ಲಿ ಪ್ರದರ್ಶಿತಗೊಂಡಿದ್ದು ಸ್ಮರಣಾರ್ಹ ಘಟನೆ. ಕನ್ನಡದಲ್ಲಿ 'ಹಂಸಗೀತೆ' ಸಿನಿಮಾ ಆದುರು 1975ರಲ್ಲಿ. ಅದರ ನಿರ್ದೇಶಕರು ಜಿ.ವಿ.ಅಯ್ಯರ್. ಅದೇ ವರ್ಷ ಈ ಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾದರೆ, 1975-76ನೇ ಸಾಲಿನಲ್ಲಿ ದ್ವಿತಿಯ ಅತ್ಯುತ್ತಮ ಚಿತ್ರವೆಂದು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. 1978ರಲ್ಲಿ ಮದರಾಸಿನಲ್ಲಿ ಏರ್ಪಟ್ಟ ಭಾರತಿಯ ಪನೋರಮಾದಲ್ಲೂ ಈ ಚಿತ್ರ ಪ್ರದರ್ಶಿಲ್ಪಟ್ಟಿತು. ಅಲ್ಲದೇ ಪ್ರಪಂಚದಾದ್ಯಂತ ಪ್ರದರ್ಶಿತವಾಗಿ ದುರ್ಗದ ಬೆಟ್ಟ, ಸ್ಮಾರಕಗಳನ್ನು ಪರಿಚಯಿಸಿಕೊಟ್ಟಿತು.
'ಹಂಸಗೀತೆ'ಗೂ ಮೊದಲು 1972ರಲ್ಲಿಯೇ ನಿರ್ದೇಶಕರ ನಿರ್ದೇಶಕ ಎಂದೇ ಖ್ಯಾತಿಯ 'ಎಸ್.ಆರ್.ಪುಟ್ಟಣ್ಣ ಕಣಗಾಲ್' ರವರ ದಿಗ್ದರ್ಶನದಲ್ಲಿ ನಿರ್ಮಿತವಾದ ಚಿತ್ರ 'ನಾಗರಹಾವು'. ಇದೇ ಚಿತ್ರದ ಮೂಲಕ ನಟ 'ವಿಷ್ಣುವರ್ಧನ್' ರವರು ರಾಮಾಚಾರಿಯಾಗಿಯೂ, ನಟ 'ಅಂಬರೀಶ್' ರವರು ಜಲೀಲ್ಆಗಿಯೂ ಕನ್ನಡದ ಬೆಳ್ಳಿತೆರೆಗೆ ಪರಿಚಯವಾದರು. ಚಿತ್ರರಂಗದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಈ ಚಿತ್ರವೂ ದುರ್ಗದವರಿಗೆ ತಮ್ಮ ಊರಿನ ಬಗೆಗೆ ಎಷ್ಟು ಅಭಿಮಾನವಿತ್ತೊ ಅದರ ಹತ್ತರಷ್ಟು ಅಭಿಮಾನ ಬೆಳೆಯಲು ಈ ಚಿತ್ರ ಕಾರಣವಾದುದರಲ್ಲಿ ಆಶ್ಚರ್ಯವೇನಿಲ್ಲ. 'ನಾಗರಹಾವು' ಚಿತ್ರದ ಹಿಂದಿಯ ಅವತರಣಿಕೆಯಾದ 'ಜಹರೀಲಾ ಸಾಂಪ್' ದುರ್ಗದ ಪರಿಸರದಲ್ಲಿ ರೂಪು ತಳೆದು ಯಶಸ್ವಿಯಾಯಿತು. ದುರ್ಗದ ಸ್ಮಾರಕಗಳನ್ನು ವಿಶ್ವದ ಮಟ್ಟದಲ್ಲಿ ಪರಿಚಯಿಸಿತು. ದುರ್ಗದ ಇತಿಹಾಸದಲ್ಲಿ ಬೆರೆತ ವೀರರಮಣಿ ಓಬವ್ವೆಯ 'ಇಮೇಜ್'ಅನ್ನು ಇನ್ನಷ್ಟು ಎತ್ತರಿಸಲು 'ನಾಗರಹಾವು' ಚಿತ್ರವು ಕಾರಣವೆನಿಸಿದುದು ವಾಸ್ತವ.
'ನಾಗರಹಾವು', 'ಹಂಸಗೀತೆ'ಗಳ ನಂತರ ಹಲವಾರು ಸಾಮಾಜಿಕ ಚಿತ್ರಗಳು ದುರ್ಗದ ಸ್ಮಾರಕಗಳ ಹಿನ್ನೆಲೆಯಲ್ಲಿ ಚಿತ್ರಿತಗೊಂಡವಾದರೂ, ದುರ್ಗದ ಹಿನ್ನೆಲೆಯಲ್ಲಿ ಪೂರ್ಣಪ್ರಮಾಣದವಾದ ಚಿತ್ರ ಬರಲು ಚಿತ್ರದುರ್ಗದ ಜನತೆ ಮೂರುವರೆ ದಶಕಗಳ ಕಾಲ ಕಾಯಬೇಕಾಯಿತು. 2006ರಲ್ಲಿ ಬಿ.ಎಲ್.ವೇಣು ರವರಿಂದ ರಚಿತವಾದ ಐತಿಹಾಸಿಕ ಕಾದಂಬರಿ 'ಕಲ್ಲರಳಿ ಹೂವಾಗಿ', ಅದೇ ಹೆಸರಿನಲ್ಲಿ ಟಿ.ಎಸ್.ನಾಗಭರಣ ರವರ ನಿರ್ದೇಶನದಲ್ಲಿ ಚಿತ್ರಿತವಾಯಿತು. ಅದೇ ವರ್ಷ ನಾಡಿನಾದ್ಯಂತ ಬಿಡುಗಡೆಯಾಗಿ ಜಯಭೇರಿ ಬಾರಿಸಿದುದು ಇತಿಹಾಸ
ಚಂದ್ರವಳ್ಳಿ

ಚಿತ್ರದುರ್ಗದ ವಾಯುವ್ಯ ಬೆಟ್ಟದ ತಪ್ಪಲಿನ ಪ್ರದೇಶವೇ ‘ಚಂದ್ರವಳ್ಳಿ’. ಅಂಕಲಿಮಠದಿಂದ ಆಂಜನೇಯಗುಡಿವರೆಗೂ ಉತ್ತರ-ದಕ್ಷಿಣಾದಿಯೋಪಾದಿಯಲ್ಲಿ ಈ ಪ್ರದೇಶ ಹಬ್ಬಿದೆ. ಈ ಪ್ರದೇಶದಲ್ಲಿ ಉತ್ಖನನ, ಭೂಸಂಶೋಧನೆ ನಡೆಸಿದಾಗ ಈ ಪ್ರದೇಶದಲ್ಲಿ ದೊರೆತ ವಸ್ತುಗಳ ನಾಣ್ಯಗಳು, ಕಟ್ಟಡದ ಅವಶೇಷಗಳಿಂದ ಇಲ್ಲಿ ಚಂದ್ರವಳ್ಳಿ (ಚಂದನಾವತಿ) ಎಂಬ ದೊಡ್ಡ ನಗರವಿದ್ದುದಾಗಿಯೂ, ಪ್ರಾಚೀನ ಸಂಸ್ಕೃತಿಯ ತಾಣವಾಗಿದ್ದಿತೆಂದು, ಈ ಸಂಸ್ಕೃತಿ ಹರಪ್ಪ, ಮೆಹೊಂಜೋದಾರ ಸಂಸ್ಕೃತಿಗೆ ಸಮಾನವೆಂದು ಸಂಶೋಧಕರ ಅಭಿಪ್ರಾಯ.
ಇಲ್ಲಿ ದೊರೆತ ಸಾವಿರಕ್ಕೂ ಮಿಗಿಲಾದ ವಸ್ತುಗಳಿಂದ ಕ್ರಿಸ್ತ ಪೂರ್ವದಲ್ಲಿಯೇ ಚಂದ್ರವಳ್ಳಿ ಪ್ರದೇಶವು ನಾಗರೀಕವಾಗಿದ್ದಿತೆಂದು ತಿಳಿದು ಬಂದಿದೆ. ಇಲ್ಲಿ ಕ್ರಿ.ಪೂ. 139ರಲ್ಲಿ ರ್ಹ್ಯಾ ಉಂಗಿಯ ಹಿತ್ತಾಳೆ ನಾಣ್ಯ, ರೋಮ್ ಚಕ್ರವರ್ತಿಯ ಅಗಸ್ಟಸ್ ನ ಬೆಳ್ಳಿಯ ನಾಣ್ಯ, ವೀರ ಬಲ್ಲಾಳನ ನಾಣ್ಯ ದೊರೆತಿವೆ. ಇಲ್ಲಿ ದೊರೆಕಿರುವ ಶಾತವಾಹನರ ನಾಣ್ಯಗಳ ಮೇಲೆ ‘ಪುಲುಮಾಯಿ’, ‘ಮಹಾರಥಿ’ ಮುಂತಾದವರ ಹೆಸರುಗಳಿವೆ. ಹಲವಾರು ಆಧಾರಗಳಿಂದ ಮೌರ್ಯ ಚಕ್ರವರ್ತಿ ಅಶೋಕನ ಕಾಲದಿಂದ ಕದಂಬರ ಮಯೂರವರ್ಮನ ಕಾಲದವರೆಗೂ ಈ ಪ್ರದೇಶದಲ್ಲಿ ಬೌದ್ಧ ಮತ ಪ್ರಚಾರದಲ್ಲಿತೆಂದು ತಿಳಿಯಬಹುದಾಗಿದೆ.
ಇಲ್ಲಿಯ ಭೈರವೇಶ್ವರ ದೇವಾಲಯದ ಬಳಿಯ ಮಯೂರವರ್ಮನ ಶಾಸನದಿಂದ ಈ ಪ್ರದೇಶದಲ್ಲಿ ಆಗಲೇ ಇದ್ದ ‘ತಟಾಕ(ಕೆರೆ)’ಯನ್ನು ದುರಸ್ಥಿ ಮಾಡಿಸಿದನೆಂದು ತಿಳಿದು ಬರುತ್ತದೆ. ಈಗ ಅದೇ ಪ್ರದೇಶದಲ್ಲಿ ಸರ್ಕಾರವು ಸುಂದರವಾದ ಕೆರೆಯನ್ನು ಕಟ್ಟಿಸಿ ನೆನಪನ್ನು ಚಿರಸ್ಥಾಯಿಯಾಗಿಸಿದ್ದಾರೆ. ಇದೇ ಚಂದ್ರವಳ್ಳಿ ಪ್ರದೇಶದಲ್ಲಿ ಶ್ರೀ ಹುಲಿಗೊಂದಿ ಭೈರವೇಶ್ವರ ದೇವಾಲಯವು, ಚಂದ್ರವಳ್ಳಿ ಕೆರೆ, ಅಂಕಲಿಮಠ, ಪಂಚಲಿಂಗೇಶ್ವರ ಗುಹಾಂತರ ದೇವಾಲಯ, ಧವಳಪ್ಪನ ಗುಡ್ಡ, ಬಾಲಾಂಜನೇಯ ಪ್ರೇಕ್ಷಣೀಯ ಸ್ಥಳಗಳಾಗಿವೆ.
more:>> www.chitharadurga.com
ತ.ರಾ.ಸು.
ಖ್ಯಾತ ಸಂಶೋಧಕರಾದ ಹುಲ್ಲೂರು ಶ್ರೀನಿವಾಸ ಜೋಯಿಸರ ಚಿತ್ರದುರ್ಗದ ಬಗ್ಗೆ ಹೇಳುತ್ತಿದ್ದ ಕಥೆಗಳೇ, ಮುಂದೊಂದು ದಿನ “ದುರ್ಗಾಸ್ತಮಾನ”ದಂತಹ ಮಹಾನ್ ಐತಿಹಾಸಿಕ ಕಾದಂಬರಿಗೆ ಪ್ರೇರಣೆಯಾಯಿತು. ಅದಕ್ಕೂ ಮುಂಚೆ ಒಮ್ಮೆ ವೆಂಕಣ್ಣಯ್ಯನವರು ವಾಚಾಳಿಯಾಗಿದ್ದ ತ.ರಾ.ಸು. ರವರಿಗೆ “ಇಷ್ಟೆಲ್ಲಾ ಮಾತಾನಾಡುವಿಯೆಲ್ಲಾ, ಇದನ್ನೇ ಬರೆಯುವ ಸಾಮರ್ಥ್ಯ ನಿನ್ನಲ್ಲಿದೆಯೇ? ಒಂದು ಕಥೆ ನಿನ್ನ ಕೈಯಲ್ಲಿ ಬರೆಯಲಾದೀತೆ?” ಎಂದು ಸವಾಲು ಹಾಕಿದಾಗ ತ.ರಾ.ಸು. ರವರು ಸಂಜೆಯೊಳಗೆ ಒಂದು ಕಥೆ ಬರೆದು ಹತ್ತು ರೂಪಾಯಿ ಗಿಟ್ಟಿಸಿಕೊಂಡರು. ಆ ಕಥೆಯ ಹೆಸರು “ಪುಟ್ಟನ ಚೆಂಡು”. (ಅವರ ಕೊನೆಯ ಐತಿಹಾಸಿಕ ಕಾದಂಬರಿ ‘ದುರ್ಗಾಸ್ತಮಾನ’ವನ್ನು ಟಿ.ಎಸ್.ವೆಂಕಣ್ಣಯ್ಯನವರಿಗೆ ಅರ್ಪಿಸಿದ್ದಾರೆ.) ರಾಮಸ್ವಾಮಯ್ಯನವರ ಮಿತ್ರನಾಗಿದ್ದ ಎಸ್.ನಿಜಲಿಂಗಪ್ಪನವರು ಪ್ರೀತಿಯಿಂದ ತ.ರಾ.ಸು.ರವರನ್ನು ‘ಧ್ರುವ’ ಎಂದು ಕರೆಯುತ್ತಿದ್ದರು. ಗಾಂಧೀಜಿಯವರ ಚಳುವಳಿಯು ದೇಶಾದಾಂತ್ಯ ಸಂಚಲನ ಉಂಟುಮಾಡಿತ್ತು.1937ರ ಸುಮಾರಿನಲ್ಲಿ ಚಿತ್ರದುರ್ಗದಲ್ಲಿ ಧ್ವಜ ಸತ್ಯಗ್ರಹ ನಡೆದು ಜಿಲ್ಲೆಯ ಹೊಸದುರ್ಗ ಪಟ್ಟಣವನ್ನು ಕೇಂದ್ರವನ್ನಾಗಿಸಿಕೊಂಡು ಮಿತ್ರರೊಡನೆ ಹಳ್ಳಿ-ಹಳ್ಳಿಗಳಲ್ಲಿ ಸಂಚರಿಸಿ ಕ್ರಾಂತಿ ಗೀತೆಗಳನ್ನು ಹಾಡುತ್ತ.ಭಾಷಣ ಮಾಡುತ್ತಿದ್ದರು. ಬಾಗೂರು ಎಂಬ ಹಳ್ಳಿಯಲ್ಲಿ ಭಾಷಣ ಮಾಡುತ್ತಿದ್ದಾಗ ತ.ರಾ.ಸು. ದಸ್ತಗಿರಿಯಾದರು.ಆಗ ಅವರಿಗೆ 17ರ ಪ್ರಾಯ!
ಚಿತ್ರದುರ್ಗದಲ್ಲಿದ್ದರೆ ಮಗ ಚಳುವಳಿಗಳ ಹಿಂದೆ ಹೋಗಬಹುದೆಂದು ರಾಮಸ್ವಾಮಯ್ಯನವರು ತ.ರಾ.ಸು. ರವರನ್ನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರಿಸಿದರು. ಎಸ್.ಎಸ್.ಎಲ್.ಸಿ. ಮುಗಿಸಿಕೊಂಡ ತ.ರಾ.ಸು. ಶಿವಮೊಗ್ಗದಲ್ಲಿ ಕಾಲೇಜು ಸೇರಿ, ಕಾಲೇಜಿನ ಪ್ರಬಂಧ ಸ್ಪರ್ಧೆಯಲ್ಲಿ ಬಿ.ಎಂ.ಶ್ರೀ.ಯವರಿಂದ ಬಹುಮಾನ ಸ್ವೀಕರಿಸಿದರು. ಶಿವಮೊಗ್ಗದ ಕಾಲೇಜಿನಲ್ಲಿ ತ.ರಾ.ಸು. ಓದಿದ್ದು ಒಂದೇ ವರ್ಷ. ಜೂನಿಯರ್ ಇಂಟರ್ ಮೀಡಿಯಟ್ ಪರೀಕ್ಷೆಯ ನಂತರ ಸೀನಿಯರ್ ಇಂಟರ್ ಓದಲು ತುಮಕೂರಿಗೆ ಹೋದರು. 1942ರ ಆಗಸ್ಟ್ 9 ರಂದು ಕ್ವಿಟ್ ಇಂಡಿಯಾ ಚಳುವಳಿ (ಚಲೇಜಾವ್ ಚಳುವಳಿ) ಆರಂಭವಾಗುತ್ತಿದ್ದಂತೆ ಬ್ರಿಟೀಷರು ಗಾಂಧೀಜಿ ಮೊದಲಾದ ರಾಷ್ಟ್ರನಾಯಕರನ್ನು ಬಂಧಿಸಿದರು. ಇದರಿಂದ ಇಡೀ ಶಾಲಾ ಕಾಲೇಜುಗಳಿಗೆ ಬಹಿಷ್ಕಾರ ಹಾಕಲಾಯಿತು. ವಿದೇಶಿ ವಸ್ತುಗಳ ದಹನ ನಡೆಸಲಾಯಿತು. ಇದಕ್ಕೆ ತ.ರಾ.ಸು. ಮತ್ತು ಇವರ ಮಿತ್ರರೂ ಹೊರತಾಗಿರಲಿಲ್ಲ. ಒಮ್ಮೆ ಈ ತಂಡ ರೈಲು ಹಳಿಗಳನ್ನು ತಪ್ಪಿಸಿ ಸೇತುವೆಯನ್ನು ಉರುಳಿಸುವ ಏರ್ಪಾಡು ಮಾಡಿಕೊಂಡಿದ್ದಾಗ ಅದು ಪೋಲಿಸರ ಗಮನಕ್ಕೆ ಬಂದು ದಸ್ತಗಿರಿಯಾದರು. ಸೆರೆಮನೆಯಲ್ಲಿದ್ದರೂ ಇವರ ಚಳುವಳಿ ಮುಂದುವರೆದಿತ್ತು. 1942ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದರು. ಜೈಲಿನಿಂದ ಬಿಡುಗಡೆಯೇನೋ ಆದರು. ಆದರೆ ಗಾಂಧೀಜಿಯವರು ಬಿಡುಗಡೆಯಾದ ಹೊರತು ಹಾಗೂ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಹೊರತು ಪುನಃ ಕಾಲೇಜು ಮೆಟ್ಟಿಲು ಹತ್ತುವುದಿಲ್ಲ ಎಂದು ನಿರ್ಧರಿಸಿದರು.